ಸದಾ ನನ್ನೊಡನಿರಬೇಕೆಂದು ನಾ ನಿನ್ನ ಬೇಡಿದೆ,
ತಡ ಮಾಡದೆ ಆಸೆಯ ನೀಗಿಸೆಂದು ನಾ ನಿನ್ನ ಕಾಡಿದೆ,
ಉತ್ತರವಾಗಿ ಧ್ಯಾನಕ್ಕೆ ನೀ ನನ್ನ ಕೂಡಿಸಿದೆ,
ನಿನ್ನೊಳಗೆಯೇ ನಾನಿರುವೆನೆಂದು ನನಗೆ ನೀ ತೋರಿಸಿದೆ,
ಅರಿವ ಮೂಡಿಸಿ ಎಲ್ಲ ಕೋಪ-ತಾಪ, ದುಃಖ ಕಷ್ಟಗಳ ಮರೆಸಿದೆ,
ಬೆಲೆಯಿರದ ಚಿಂತೆ ಸಂತೆಗಳ ಮನದಿಂದ ನೀ ಸರಿಸಿದೆ,
ಎಂದಿನಂತೆ ಮತ್ತೆ ಜೀವನ ಕಲೆ ಪಾಠವ ನನಗೆ ನೀ ಕಲಿಸಿದೆ,
ನೀವೊಂದಿದ್ದರೆ ಕಣ್ಣಮುಚ್ಚಿ ಎಲ್ಲೆಲ್ಲೂ ನಾ ನಡೆಯಬಲ್ಲೆ ಎಂಬುದ ನನಗೆ ನೆನಪಿಸಿದೆ,
ಅಂತೂ ಜನ್ಮದಿನಕೆ ಒಳ್ಳೆ ಕೊಡುಗೆಯನ್ನೇ ನೀ ನನಗೆ ನೀಡಿದೆ.
-- ಉನ್ನತ ಧ್ಯಾನ ಶಿಬಿರದಲ್ಲಿ ನನ್ನ ಜನ್ಮ ದಿನದಂದು ( ಜನವರಿ ೨೮) ಹರಿ ಓಂ ಧ್ಯಾನ ಮಾಡುವಾಗ
ಮೂಡಿಬಂದ ಕೆಲ ಸಾಲುಗಳು.
No comments:
Post a Comment